Skip to main content

Posts

Showing posts with the label bangalore and rain and road

Rain rain go away

  ಮಳೆ ಬಂದಾಗ ಬೆಂಗಳೂರಿನ ರಸ್ತೆಗಳು ಕೊಚ್ಚೆ ಗುಂಡಿಗಳಗುವದು ಹಳೆಯ ವಿಷಯ. ಆದರೆ ಈಗ ಮಳೆಯಲ್ಲಿ ರಸ್ತೆಗಳು ನದಿಗಳಾಗುತ್ತಿವೆ. ಆ ನದಿಯನ್ನು ದಾಟುತ್ತ ನಾವು ವಾಹನ ಓಡಿಸಬೇಕು ಅಥವಾ ಬಹಳ ಸಲ ತಳ್ಳಬೇಕು. ಯಾರನ್ನು ಬಯ್ಯೋಣ ? ಹುಯ್ಯೋ ಹುಯ್ಯೋ ಮಳೆರಾಯ ಎಂದು ನಾವೆಲ್ಲ ಚಿಕ್ಕವರಿದ್ದಾಗ ಹೇಳಿದ್ದನ್ನು ಮರೆಯದೆ ಈಗ ಹುಯ್ಯುತ್ತಿರುವ ಮಳೆ ರಾಯನನ್ನೇ ? ರಸ್ತೆ, ಚರಂಡಿ ವ್ಯವಸ್ತೆ ಸರಿ ಮಾಡಲು ಸಮಯ ಸಿಗದ ತುಂಬಾ ಮಹತ್ವದ ಕೆಲಸ ಮಾಡುತ್ತಿರುವ ಸರಕಾರವನ್ನೇ? ಅಥವಾ ಇದೆಲ್ಲ ತಿಳಿದೂ ರಸ್ತೆಗೆ ಇಳಿಯುವ ಸಾಹಸ ಮಾಡುವ ನಮ್ಮ ಮೂರ್ಖತನವನ್ನೆ ? ನೀವೇ ಹೇಳಿ